ಆಂಜನೇಯನ ಬಾಲಕ್ಕೆ ಬೆಂಕಿ ಬಿದ್ದು, ಇಡೀ ಲಂಕೆಯೇ ಸುಟ್ಡಿ ಹೋಯಿತು. ಆರ್ ಎಸ್ಎಸ್ ಶಕ್ತಿ ಏನು ಪ್ರಪಂಚಕ್ಕೆ ಗೊತ್ತಿದೆ. ಪ್ಯಾಂಟೂ, ಚಡ್ಡಿ ಸುಡೋದನ್ನೆಲ್ಲ ಬಿಟ್ಡು ಬಿಡಿ. ಆರ್ ಎಸ್ ಎಸ್ ಬಗ್ಗೆ ಮಾತಾಡಿದ್ರೆ ಹುಷಾರ್ ಎಂದು ಸಚಿವ ಆರ್ ಅಶೋಕ್ ಹೇಳಿದ್ದಾರೆ.
![](https://rajnewskannada.in/wp-content/uploads/2022/06/image-54-1024x683.png)
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು ಆರ್ ಎಸ್ ಎಸ್ ತಂಟೆಗೆ ಬಂದ್ರೆ ಸುಟ್ಡು ಹೋಗ್ತಿರಿ. ನೀವೆಲ್ಲರೂ ಚುನಾವಣೆಗೆ ಹೋಗ್ತಿದ್ದೀರಿ,ಸ್ವಲ್ಪ ಹುಷಾರಾಗಿರಿ. ನೀವೇ ಬಾದಾಮಿಯಲ್ಲಿ ಸ್ವಲ್ಪ ಅಂತರದಿಂದ ಗೆದ್ದಿದ್ದೀರಿ. ಮುಂದೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಕ್ಷೇತ್ರ ಹುಡುಕ್ತಿದ್ದೀರಿ. ಇದನ್ನೂ ಓದಿ : – ಸಿದ್ದರಾಮಯ್ಯಗೆ ರಾಜಕೀಯ ತಿಕ್ಕಲು ಜಾಸ್ತಿ ಆಗಿದೆ – ಚಲವಾದಿ ನಾರಾಯಣಸ್ವಾಮಿ
![](https://rajnewskannada.in/wp-content/uploads/2022/06/image-55.png)
ಇವಾಗ ಆರ್ ಎಸ್ ಎಸ್ ಬಗ್ಗೆ ಟೀಕೆ ಮಾಡಿದ್ರೆ, ನೀವು ಚುನಾವಣೆ ಯಲ್ಲು ಸೋಲ್ತಿರಿ. ಕೇವಲ ಸೋನಿಯ ಗಾಂಧಿ ಮೆಚ್ಚಿಸಲು ಹೋಗಿ, ನೀವು ಚುನಾವಣೆಯಲ್ಲಿ ಸುಟ್ಟು ಹೋಗ್ತಿರಿ ಹುಷಾರ್..! ಎಂದು ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದ್ರು.
ಇದನ್ನೂ ಓದಿ : – ಆರ್ ಎಸ್ ಎಸ್ ಕಳೆದ 75 ವರ್ಷಗಳಿಂದ ಜನಸೇವೆ ಮಾಡ್ತಿದೆ – ಸಿಎಂ ಬೊಮ್ಮಾಯಿ