ಕಳೆದ ಎರಡು ದಿನಗಳ ಹಿಂದೆ ಸ್ಯಾಂಡ್ ಟಿಪ್ಪರ್ ಲಾರಿಯಲ್ಲಿ ಅಪರಿಚಿತನ ಮೃತದೇಹ ಪತ್ತೆಮಾಡಿದ್ದಾರೆ. ತಮಿಳುನಾಡಿನಿಂದ ಸ್ಯಾಂಡ್ ತುಂಬಿಕೊಂಡು ಬಂದಿದ್ದ ಟಿಪ್ಪರ್ ಲಾರಿಯಲ್ಲಿ ಒಂದು ಮಾಸ್ಕ್ ನಿಂದ ಮೃತದೇಹವನ್ನು ಪತ್ತೆ ಹಚ್ಚಿದ್ದಾರೆ.
![](https://rajnewskannada.in/wp-content/uploads/2022/05/sui.png)
ಮೃತಹೊಂದಿರುವ ಯುವಕನನ್ನು ಹೊಸಕೋಟೆಯ ಪಿಯುಸಿ ಓದುತ್ತಿದ್ದ ಸೋಮನಾಥ್ ( 19 ) ಎಂದು ಗುರುತ್ತಿಸಿದ್ದಾರೆ. ಹೊಸಕೋಟೆಯಲ್ಲಿ ಯುವಕನ ಪೋಷಕರು ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು. ಐದನೇ ತಾರೀಖು ಮನೆಯಿಂದ ನಾಪತ್ತೆಯಾಗಿದ್ದ ಸೋಮನಾಥ್ ಆರನೇ ತಾರೀಖು ಸ್ಯಾಂಡ್ ಟಿಪ್ಪರ್ ಲಾರಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಅನುಮನಾಸ್ಪದವಾಗಿ ಸಾವನ್ನಪ್ಪಿರುವ ಯುವಕನ ಬಗ್ಗೆ ಪೋಲಿಸರು ಕೆಆರ್ ಪುರಂ ಸ್ಟಾಂಡ್ ನಲ್ಲಿ ಎಲ್ಲರ ಬಳಿ ವಿಚಾರಣೆ ನಡೆಸಿದರು. ಯಾವುದೇ ಸುಳಿವು ಸಿಗದ ಹಿನ್ನಲೆಯಲ್ಲಿ ಮಾಸ್ಕ್ ಮೇಲಿನ ಹೆಸರನ್ನು ನೋಡಿ ಹೊಸಕೋಟೆಯ ಬಳಿ ಯುವಕನ ವಾಸ್ತವ್ಯದ ಬಗ್ಗೆ ಮಾಹಿತಿಯನ್ನು ಪೋಲಿಸರು ಸಂಗ್ರಹಿಸಿದ್ದಾರೆ. ಇದನ್ನೂ ಓದಿ : – 2A ಮೀಸಲಾತಿಗಾಗಿ ಮುಖ್ಯಮಂತ್ರಿಗಳ ಮನೆಯ ಮುಂದೆ ಧರಣಿ ಸತ್ಯಾಗ್ರಹ ಮಾಡುತ್ತೇವೆ – ಜಯಮೃತ್ಯುಂಜಯ ಸ್ವಾಮೀಜಿ