ಲಖನೌ ವಿರುದ್ಧ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 14 ರನ್ಗಳ ರೋಚಕ ಗೆಲುವು ಪಡೆದಿದೆ. ಬಳಿಕ ಮಾತನಾಡಿದ ರಜತ್ ಪಾಟಿದರ್ ತಮ್ಮ ಬ್ಯಾಟಿಂಗ್ ಸಾಮರ್ಥ್ಯವೇನೆಂಬುದನ್ನು ಬಹಿರಂಗಪಡಿಸಿದ್ದಾರೆ.
![](https://rajnewskannada.in/wp-content/uploads/2022/05/WhatsApp-Image-2022-05-26-at-1.54.04-PM.jpeg)
ಬುಧವಾರ ರಾತ್ರಿ ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಆರ್ ಸಿ ಬಿ ಪರ ರಜತ್ ಪಾಟಿದರ್ ಕೇವಲ 54 ಎಸೆತಗಳಲ್ಲಿ ಅಜೇಯ 112 ರನ್ ಸಿಡಿಸಿದರು. ಆ ಮೂಲಕ ಆರ್ಸಿಬಿ ತನ್ನ ಪಾಲಿನ 20 ಓವರ್ಗಳಿಗೆ 207 ರನ್ ದಾಖಲಿಸಲು ನೆರವಾಗಿದ್ದರು. ಅಂತಿಮವಾಗಿ ಈ ಪಂದ್ಯದಲ್ಲಿ ಆರ್ಸಿಬಿ ಗೆಲುವು ಪಡೆಯಿತು. ರಜತ್ ಪಾಟಿದರ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಸುಮಾರು 10 ಲಕ್ಷ ಹಣವನ್ನು ಪಡೆದ್ರು. ಇದನ್ನೂ ಓದಿ : – ಆರ್ ಸಿ ಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್ – ಲಖನೌ ವಿರುದ್ಧದ ಪಂದ್ಯಕ್ಕೆ ಹರ್ಷಲ್ ಪಟೇಲ್ ಫುಲ್ ಫಿಟ್
![](https://rajnewskannada.in/wp-content/uploads/2022/05/WhatsApp-Image-2022-05-26-at-1.53.48-PM.jpeg)
ಫೆಬ್ರವರಿಯಲ್ಲಿ ನಡೆದಿದ್ದ 2022ರ ಐಪಿಎಲ್ ಆಟಗಾರರ ಮೆಗಾ ಹರಾಜಿನಲ್ಲಿ ರಜತ್ ಪಾಟಿದರ್ ಅವರನ್ನು ಯಾವುದೇ ತಂಡ ಖರೀದಿಸಿರಲಿಲ್ಲ. ಆದರೆ, ನವನೀತ್ ಸಿಸೋಡಿಯಾ ಗಾಯಕ್ಕೆ ತುತ್ತಾಗಿದ್ದರಿಂದ ಅವರ ಸ್ಥಾನಕ್ಕೆ ರಜತ್ ಪಾಟಿದರ್ ಅವರನ್ನು ಆರ್ಸಿಬಿಗೆ ಕರೆಸಿಕೊಳ್ಳಲಾಗಿತ್ತು. ಅದರಂತೆ ಸಿಕ್ಕ ಅವಕಾಶವನ್ನು ಪಾಟಿದರ್ ಅತ್ಯುತ್ತಮವಾಗಿ ಸದುಪಯೋಗಪಡಿಸಿಕೊಂಡು ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ.ಇದನ್ನೂ ಓದಿ : – ಥಾಯ್ ಓಪನ್ – ಚೀನಾ ಎದುರು ಸೋತು ಸೆಮಿಸ್ನಿಂದ ಹೊರಬಿದ್ದ ಪಿ.ವಿ ಸಿಂಧು
![](https://rajnewskannada.in/wp-content/uploads/2022/05/WhatsApp-Image-2022-05-26-at-1.53.34-PM.jpeg)
“ಡಾಟ್ ಬಾಲ್ಗಳನ್ನು ರನ್ಗಳನ್ನಾಗಿ ಪರಿವರ್ತಿಸುವ ಸಾಮರ್ಥ್ಯವನ್ನು ನಾನು ಮೈಗೂಡಿಸಿಕೊಂಡಿದ್ದೇನೆ. ಹಾಗಾಗಿ ತಾನು ಎಂದಿಗೂ ಒತ್ತಡಕ್ಕೆ ಒಳಗಾಗುವುದಿಲ್ಲ,” ಎಂದು ಹೇಳಿದರು. ಪವರ್ಪ್ಲೇನ ಕೊನೆಯ ಓವರ್ನಲ್ಲಿ ಕೃಣಾಲ್ ಪಾಂಡ್ಯಗೆ ರಜತ್ ಪಾಟಿದರ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ರಜತ್ ಪಾಟಿದಾರ್ ಬ್ಯಾಟಿಂಗ್ ಬಗ್ಗೆ ಎಲ್ಲೆಡೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.
ಇದನ್ನೂ ಓದಿ : – ಥಾಮಸ್ ಕಪ್ 2022 – ಇದೇ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ ಭಾರತ