ಖಾಲಿ ಬ್ಯಾಲೆಟ್ ಪೇಪರ್ ಹಾಕಿದ್ದರೆ ರಾಜಕೀಯದಿಂದ ನಿವೃತ್ತಿ ಹೊಂದುವೆ – ಎಸ್.ಆರ್ ಶ್ರೀನಿವಾಸ್

ನನಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮಾಡುವ ಪ್ರಾಮುಖ್ಯತೆ ಬಗ್ಗೆ ಗೊತ್ತಿದೆ. ನಾನು 4 ಬಾರಿ ಶಾಸಕನಾಗಿದ್ದೆ. ಯಾಕೆ ಅವರು ಅಪಾದನೆ ಮಾಡ್ತಾರೋ ಗೊತ್ತಿಲ್ಲ ಎಂದು ಶಾಸಕ ಎಸ್.ಆರ್ ಶ್ರೀನಿವಾಸ್ (SR.Srinivas) ಹೇಳಿದ್ದಾರೆ.

ತುಮಕೂರಿನಲ್ಲಿ (Tumkuru) ಮಾತನಾಡಿದ ಅವರು ಖಾಲಿ ಬ್ಯಾಲೇಟ್ ಪೇಪರ್ ಇತ್ತೆಂದರೇ ನಾನು ಮತದಾನ ಮಾಡಿಲ್ಲ ಅನ್ನೋ ಅಪಾದನೆ ಮಾಡೋದರಲ್ಲಿ ನಿಜ ಇರುತ್ತೆ. ನಾನು ಅಸಮರ್ಥ ವ್ಯಕ್ತಿ, ನಾನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉಳಿಯಲು ಯೋಗ್ಯತೆ ಇಲ್ಲದ ವ್ಯಕ್ತಿ ಅಂತಾ ಹೇಳಲಿ. ಹಾಗೇ ಇದ್ದರೆ ರಾಜ್ಯದ ಜನರ ಕ್ಷಮೆ ಕೇಳುವೇ. ಖಾಲಿ ಬ್ಯಾಲೆಟ್ ಪೇಪರ್ ಹಾಕಿದ್ದರೇ ರಾಜಕೀಯದಿಂದ ನಿವೃತ್ತಿ ಹೊಂದುವೆ. ಇನ್ನೂ ಎಂದು ರಾಜಕೀಯಕ್ಕೆ ನಿಲ್ಲಲ್ಲ. ನಾನು ಮತ ಹಾಕಿ ಅವರಿಗೆ ತೋರಿಸಿ ಬಂದಿದ್ದೇನೆ. ಆದರೂ ಯಾಕೆ ಹೀಗೆ ಹೇಳುತ್ತಿದ್ದಾರೋ ಗೊತ್ತಿಲ್ಲ. ದ್ವೇಷ ಇರುವ ಕಾರಣ ಮತ್ತೊಬ್ಬ ಅಭ್ಯರ್ಥಿಯನ್ನ ಗುಬ್ಬಿಗೆ ತಂದು ಹಾಕಿದ್ದಾರೆ. ನಾನು ಇಲ್ಲೆ ಇರ್ತಿನಿ ಅಂತಾ ಹೇಳಿದರೂ ಕೂಡ ಅವರು ಪಕ್ಷದಲ್ಲಿ ಇರಿಸಿಕೊಳ್ಳಲು ರೆಡಿಯಿಲ್ಲ. ನಾನು ಅವರ ಮನೆಗೆ ಸೀಮಂತಕ್ಕೆ ಹೋದೆ, ಅಲ್ಲಿ ಹೋದರೂ ಮಾತನಾಡಿಸಿಲ್ಲ. ಕಾರ್ಯಾಗಾರಕ್ಕೆ ಹೋದರೂ ಮಾತನಾಡಿಸಿಲ್ಲ. ಇಲ್ಲಿಗೆ ಬಂದು ಸೀಮಂತಕ್ಕೆ ನಾನೇನು ಕರೆದಿದ್ದೇನಾ ಅಂದರು. ಇದನ್ನೂ ಓದಿ : – ಶ್ರೀನಿವಾಸ್ ಗೌಡಗೆ ಮಾನ ಮರ್ಯಾದೆ ಇದ್ಯಾ ? – ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ

ಅಷ್ಟೊಂದು ಒಳಗೆ ದ್ವೇಷ ಇದೆ. ಹೀಗಿರುವಾಗ ನನಗೆ ಹೇಗೆ ಒಳ್ಳೆಯದು ಭಯಸ್ತಾರೆಂದ್ರೆ ನನ್ನಂತ ಮೂರ್ಖ ಇನ್ನೊಬ್ಬ ಇಲ್ಲ. ನಾನು ಆತ್ಮಸಾಕ್ಷಿ ಮತ ಹಾಕಿದ್ದೇನೆ. ಬಿ ಫಾರಂ ಕೊಟ್ಟಿದ್ದಾರೆ ಅವರ ಅವಧಿ ಮುಗಿಯೋವರೆಗೂ ಆ ಪಕ್ಷಕ್ಕೆ ದ್ರೋಹ ಮಾಡಬಾರದು ಅಂತಾ ಮಾಡಿದ್ದೇನೆ. ನಾನು ರಾಜಕೀಯದಲ್ಲಿ ಅಧಿಕಾರ ಹಣ ಮುಖ್ಯವಾಗಿದ್ದರೇ ಸಚಿವರಾಗುತ್ತಿದ್ದೆ. ಯಡಿಯೂರಪ್ಪ (Yediyurappa) ಮೊದಲ ಬಾರಿಗೆ ಸಿಎಂ ಆದಾಗ ಸಚಿವರಾಗುತ್ತಿದ್ದೆ. ಮೊನ್ನೆ ಕೂಡ ಹೋದ್ರಲ್ಲ ಆಗಲೂ ಆಗ್ತಿದೆ. ಉದ್ವೇಗಕ್ಕೆ ಒಳಗಾಗಿ ಕುಮಾರಸ್ವಾಮಿ ಹೇಳಿದ್ದಾರೋ ಗೊತ್ತಿಲ್ಲ. ಮಾನ ಮಾರ್ಯಾದೆ ಇಲ್ಲ ಅಂತಿದ್ದಾರೆ ಯಾಕೋ ಗೊತ್ತಿಲ್ಲ ಎಂದು ಹೇಳಿದ್ರು. ಇದನ್ನೂ ಓದಿ : – ರಾಜ್ಯಸಭೆ ಚುನಾವಣೆ – ಜೆಡಿಎಸ್ ನಿಂದ ಮೊದಲ ಅಡ್ಡ ಮತದಾನ..!

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!