ಕಳೆದೆರಡು ದಿನಗಳಿಂದ ನಟಿ ರಮ್ಯ (RAMYA )ಹಾಗೂ ಡಿಕೆಶಿ ನಡುವೆ ಟ್ವಿಟರ್ ನಲ್ಲಿ ಭಾರಿ ಯುದ್ಧ ನಡೆಯುತ್ತಿದೆ. ಬಿಲ್ಡಪ್ ಕೊಡ್ತಿದ್ದ ಡಿಕೆಶಿವಕುಮಾರ್ (D.K. SHIVKUMAR ) ಗೆ ಈಗ ಶೇಪ್ ಔಟ್ ಆಗಿದೆ. ರಮ್ಯ ಟ್ವೀಟ್ ಬಳಿಕ ಸಾಕಷ್ಟು ಕಾಂಗ್ರೆಸ್ ನಾಯಕರು ಅವರನ್ನ ಟೀಕೆ ಮಾಡಿದ್ದಾರೆ.
![](https://rajnewskannada.in/wp-content/uploads/2022/05/ash.png)
ಅಶ್ವತ್ಥ್ ನಾರಾಯಣ್ ನ (ASHWATH NARAYAN ) ಡಿಸ್ಟ್ರಕ್ಟ್ ಮಾಡ್ತೀನಿ ಅಂತ ಹೊರಟಿದ್ದರು. ಆದರೆ ಈಗ ಅವರೇ ಡಿಸ್ಟ್ರಕ್ಟ್ ಆಗಿ ಐಸೋಲೇಟ್ ಆಗಿದ್ದಾರೆ. ರಮ್ಯ ಪಾಪ ಹೆಣ್ಣು ಮಗಳು, ಅವರನ್ನ ಕೆಟ್ಟದಾಗಿ ನಡೆಸಿಕೊಳ್ತಿದ್ದಾರೆ ಅದು ಅವರ ಆಂತರಿಕ ವಿಚಾರ, ಆದರೂ ಮಾಧ್ಯಮಗಳು ನನ್ನನ್ನೂ ಇದರಲ್ಲಿ ಸೇರಿಸಿದ್ದೀರಾ ಎಂದು ಹೇಳಿದ್ರು. ಇದನ್ನೂ ಓದಿ : – ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಸಚಿವ ಸಂಪುಟ ಒಪ್ಪಿಗೆ
![](https://rajnewskannada.in/wp-content/uploads/2022/05/ash-1.png)
ಡಿಕೆಶಿವಕುಮಾರ್ ರಾಂಗ್ ನಂಬರ್ ಡಯಲ್ ಮಾಡಿದ್ದು ಅವರ ತಪ್ಪು. ನನ್ನನ್ನ ಟಚ್ ಮಾಡಿಕೊಂಡು ಅಯ್ಯೋ ಪಾಪ ಅನ್ನೋ ಪರಿಸ್ಥಿತಿ ಡಿಕೆಶಿವಕುಮಾರ್ ಗೆ ಬಂದಿದೆ . ಎಂಥ ವ್ಯಕ್ತಿ ಅಧ್ಯಕ್ಷರಾಗಿದ್ದಾರಪ್ಪ ಅನ್ನೋ ಮುಜುಗರ ಕಾಂಗ್ರೆಸ್ ನಾಯಕರಿಗೆ ಆಗಿದೆ. ಅನುಕಂಪ ಒಳ್ಳೆಯವರ ಮೇಲೆ ಇರುತ್ತೆ, ಸಜ್ಜನರ ಮೇಲೆ ಇರುತ್ತೆ, ಡಿಕೆಶಿವಕುಮಾರ್ ಅಂಥವರ ಮೇಲಲ್ಲ. ಅವರದೇ ಪಕ್ಷದ ಹೆಣ್ಣು ಮಗಳ ಮೇಲೇಯೇ ತೇಜೋವಧೆ ಮಾಡಿದರೆ ಏನಾಗತ್ತೆ ಎನ್ನುವ ಬಿಸಿ ಡಿಕೆಶಿವಕುಮಾರ್ ಗೆ ಆಗಿದೆ.
![](https://rajnewskannada.in/wp-content/uploads/2022/05/ash-2.png)
ಇನ್ಮುಂದೆ ಡಿಕೆಶಿವಕುಮಾರ್ ಇಂಥಹ ಮಾತನ್ನ ಆಡಲ್ಲ ಅನಿಸುತ್ತದೆ. ಡಿಕೆಶಿವಕುಮಾರ್ ಇದನ್ನು ಅರ್ಥ ಮಾಡ್ಕೋತಾರೆ ಅನ್ಸತ್ತೆ. ಈ ರೀತಿ ಹೇಳಿಕೆ ಮೂಲಕ ಅವರ ವ್ಯಕ್ತಿತ್ವ ಮನೋಭಾವ ಏನು ಅನ್ನೋದು ಬಹಳ ಸ್ಪಷ್ಟವಾಗಿ ಗೊತ್ತಾಗ್ತಿದೆ. ಹೀಗಾಗಿ ನನಗೆ ಸಂತೋಷ ಆಗ್ತಿದೆ ಎಂದು ಡಿಕೆಶಿವಕುಮಾರ್ ಗೆ ಅಶ್ವತ್ಥ ನಾರಾಯಣ್ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ : – ಕ್ಷಣಾರ್ಧದಲ್ಲಿಯೇ ಪ್ರಾಣಾಪಾಯದಿಂದ ಪಾರಾದ ಬಿಜೆಪಿ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ