ಶೀನಾ ಬೋರಾ ಪ್ರಕರಣದಲ್ಲಿ (Sheena Bora Case) ಜೈಲು ಪಾಲಾಗಿರುವ ಇಂದ್ರಾಣಿ ಮುಖರ್ಜಿ (Indrani Mukerjea) ಜಾಮೀನಿನ (Bail) ಮೇಲೆ ಬಿಡುಗಡೆಯಾಗಿದ್ದಾಳೆ.
![](https://rajnewskannada.in/wp-content/uploads/2022/05/WhatsApp-Image-2022-05-19-at-12.45.23-PM-1024x576.jpeg)
2015 ರಲ್ಲಿ ಇಂದ್ರಾಣಿ ಕಾರು ಚಾಲಕ ಶ್ಯಾಮ್ವರ್ ರೈ ಮತ್ತು ಮಾಜಿ ಪತಿ ಸಂಜೀವ್ ಖನ್ನಾ ಸಹಾಯದಿಂದ ಮೊದಲ ಪತಿಯ ಮಗಳು ಶೀನಾ ಬೋರಾಳನ್ನು ಕೊಲೆ ಮಾಡಿದ ಆರೋಪದ ಮೇಲೆ ಶೀನಾ ಬೋರಾಳನ್ನ ಬಂಧಿಸಲಾಗಿತ್ತು. ಈಕೆ ಸುಮಾರು 7 ವರ್ಷದಿಂದ ಜೈಲಿನಲ್ಲಿದ್ದಾಳೆ.
ತನ್ನ ಮಾಜಿ ಪತಿ ಪೀಟರ್ ಮುಖರ್ಜಿಯ ಮಗ ರಾಹುಲ್ ಮುಖರ್ಜಿಯೊಂದಿಗೆ ತನ್ನ ಮಗಳ ಶೀನಾ ಬೋರಾ ಸಂಬಂಧಹೊಂದಿದ್ದಳು. ಇದ್ರಿಂದ ಇಂದ್ರಾಣಿ ಕೋಪಗೊಂಡು ಮಗಳನ್ನೇ ಹತ್ಯೆಗೈದಿದ್ದಳು.
ಮುಂಬೈನ ಬೈಕುಲ್ಲಾ ಮಹಿಳಾ ಜೈಲಿನಲ್ಲಿರುವ ಇಂದ್ರಾಣಿ ಮುಖರ್ಜಿ ಪರ ಹಿರಿಯ ವಕೀಲ ಮುಕುಲ್ ರೋಹಟಗಿ ವಾದ ಮಂಡಿಸಿದ್ದರು. ವಿಶೇಷ ಸಿಬಿಐ ನ್ಯಾಯಾಲಯದಿಂದ ಹಲವು ಬಾರಿ ಜಾಮೀನು ನಿರಾಕರಿಸಲಾಗಿತ್ತು. ಆಕೆ ಜೈಲಿನಲ್ಲಿ “ಈಗಾಗಲೇ ಬಹಳ ಕಾಲ ಕಳೆದಿರುವುದರಿಂದ” ಜಾಮೀನು ಪಡೆಯಲು ಆಕೆ ಅರ್ಹಳು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
![](https://rajnewskannada.in/wp-content/uploads/2022/05/WhatsApp-Image-2022-05-19-at-12.45.39-PM-1024x678.jpeg)
ಪೀಟರ್ ಮುಖರ್ಜಿಗೆ ಜಾಮೀನು
ಇಂದ್ರಾಣಿ ಅವರಿಗೆ ಸಹಾಯ ಮಾಡಿದ ಆರೋಪದ ಮೇಲೆ ತಿಂಗಳ ನಂತರ ಬಂಧಿಸಲ್ಪಟ್ಟ ಪೀಟರ್ ಮುಖರ್ಜಿ ಅವರಿಗೆ 2020 ರಲ್ಲಿ ಜಾಮೀನು ನೀಡಲಾಯಿತು. ಇದು ಸಾಂದರ್ಭಿಕ ಸಾಕ್ಷ್ಯದ ಪ್ರಕರಣ ಎಂದು ನ್ಯಾಯಾಧೀಶರು ಹೇಳಿದ್ದರು.
ಇದನ್ನೂ ಓದಿ : – ಸಾವಿರದ ಗಡಿ ದಾಟಿದ ಅಡುಗೆ ಅನಿಲ ಬೆಲೆ – ಇಂದು ಮತ್ತೆ ಮೂರುವರೆ ರೂಪಾಯಿ ಹೆಚ್ಚಳ
ಸುಳ್ಳು ಹೇಳಿದ್ದ ಇಂದ್ರಾಣಿ
ಕೊಲೆಯಾದ ಮೂರು ವರ್ಷಗಳ ನಂತರ ಶೀನಾ ಬೋರಾ ನಾಪತ್ತೆಯಾಗಿದ್ದಾಳೆ ಎಂದು ಹೊರ ಜಗತ್ತಿಗೆ ತಿಳಿದಿತ್ತು. ಇಂದ್ರಾಣಿ ತನ್ನ ಮಗಳು ಶೀನಾಳನ್ನು ಯಾವಾಗಲೂ ತನ್ನ ಸಹೋದರಿ ಎಂದು ಸುಳ್ಳು ಹೇಳಿಕೊಳ್ಳುತ್ತಿದ್ಲು. ಶೀನಾ ಯುಎಸ್ಗೆ ತೆರಳಿದ್ದಾಳೆ ಎಂದು ಇಂದ್ರಾಣಿ ಸ್ನೇಹಿತರಿಗೆ ಹೇಳಿದ್ದಳು.
![](https://rajnewskannada.in/wp-content/uploads/2022/05/WhatsApp-Image-2022-05-19-at-12.45.54-PM.jpeg)
ಇಂದ್ರಾಣಿ ಮುಖರ್ಜಿ ಅವರ ಚಾಲಕ ಪೊಲೀಸರಿಗೆ ಹೇಳಿಕೆ ನೀಡಿದ ನಂತರ ಆಕೆಯ ಅರ್ಧ ಸುಟ್ಟ ದೇಹವನ್ನು ಮುಂಬೈ ಸಮೀಪದ ಅರಣ್ಯದಿಂದ ಅಗೆಯಲಾಯಿತು. ಶೀನಾ ಬೋರಾಳನ್ನು ಆಕೆಯ ತಾಯಿ ಕಾರಿನೊಳಗೆ ಕತ್ತು ಹಿಸುಕಿ ಸಾಯಿಸಿದ್ಲು.
2017ರಲ್ಲಿ ಆರಂಭವಾದ ವಿಚಾರಣೆಯಲ್ಲಿ ಸುಮಾರು 60 ಸಾಕ್ಷಿಗಳು ತಮ್ಮ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ರು. ಇದನ್ನೂ ಓದಿ : – Gyanvapi Mosque Case – ಜ್ಞಾನವಾಪಿ ಮಸೀದಿ ಪ್ರಕರಣ-ನಾಳೆಗೆ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್