ಬುದ್ಧಿ ಮಾತು ಹೇಳಿದಕ್ಕೆ ಹೆತ್ತ ತಂದೆಯನ್ನೆ ಕೊಲೆಮಾಡಿದ ಮಗ

ಕ್ಷುಲ್ಲಕ ಕಾರಣಕ್ಕೆ ಮಗನೆ ತಂದೆಯನ್ನು ಕೊಲೆ ಮಾಡಿರುವ ಘಟನೆ ಗದಗ ತಾಲೂಕಿನ ಹಾತಲಗೇರಿಯಲ್ಲಿ ನೆಡದಿದೆ. ಭರಮಪ್ಪ ದೊಡ್ಡಮನಿ (೫೫) ಮಗನಿಂದ ಕೊಲೆಯಾದ ದುರ್ದೈವಿ . ಶನಿವಾರ ರಾತ್ರಿ ಸಹ ತಂದೆ ಮಗನ ಮಧ್ಯೆ ಕಲಹವಾಗಿದೆ.

ಕೆಲಸದ ವಿಚಾರದಲ್ಲಿ ಬೈದು ಬುದ್ಧಿ ಮಾತು ಹೇಳಿದಕ್ಕೆ ಮಗ ಸುರೇಶ್ಗೆ ಕೋಪ ಬಂದಿದೆ. ತಂದೆ ಮಗನ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಇದರಿಂದಾಗಿ ಕೋಪಗೊಂಡ ಮಗ ಮನೆಯಲ್ಲಿದ್ದ ಚೂರಿಯಿಂದ ಹೊಟ್ಟೆ ಹಾಗೂ ಎದೆ ಭಾಗಕ್ಕೆ ಮನಬಂದಂತೆ ಚುಚ್ಚಿ ಕೊಲೆ ಮಾಡಿದ್ದಾನೆ. ತೀವ್ರ ರಕ್ತ ಸ್ರಾವದಿಂದ ಭರಮಪ್ಪ ದೊಡ್ಡಮನಿ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿ ಸುರೇಶ್ ಪರಾರಿಯಾಗಿದ್ದಾನೆ. ಪ್ರಕರಣ ಸಂಬಂಧಿಸಿದಂತೆ ಸ್ಥಳಕ್ಕೆ ಗ್ರಾಮೀಣ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಪಾಪಿ ಮಗನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ : – ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ- ವಿದ್ಯುತ್ ತಂತಿ ಹರಿದು ಬಿದ್ದು ಎರಡು ಹಸುಗಳು ಸಾವು

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!