ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯ ( Southern graduate election ) ಫಲಿತಾಂಶ ಪ್ರಕಟಗೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಮಧು ಜಿ. ಮಾದೇಗೌಡ (Madhu.g.madegowda) ಭರ್ಜರಿ ಗೆಲುವು (Won) ಸಾಧಿಸಿದ್ದಾರೆ. ಮಧು ಜಿ. ಮಾದೇಗೌಡ ಪಡೆದ ಒಟ್ಟು ಮತಗಳ ಸಂಖ್ಯೆ 45,275 ಆಗಿದ್ದು, 12,205 ಮತಗಳ ಅಂತರದಿಂದ ಭರ್ಜರಿ ಗೆಲುವು ಪಡೆದುಕೊಂಡಿದ್ದಾರೆ.ಗೆಲುವಿಗೆ ನಿಗದಿಯಾದ 46,083 ಮತಗಳ ಕೋಟಾವನ್ನ ತಲುಪಲು 808 ಮತಗಳ ಕೊರತೆ ಎದುರಾಗಿತ್ತು.
![](https://rajnewskannada.in/wp-content/uploads/2022/06/image-268.png)
ಇದೇ ವೇಳೆ ಮಧು ಜಿ. ಮಾದೇಗೌಡ ಪ್ರತಿಸ್ಪರ್ಧಿ ಬಿಜೆಪಿಯ ಮೈ. ವಿ. ರವಿಶಂಕರ್ (MV.Ravishankar) ಎಲಿಮಿನೆಟ್ ಮಾಡಿ ಅಲ್ಲಿಂದ 808 ಮತ ಪಡೆಯಲಾಯ್ತು. ಆ ಮೂಲಕ ನಿಗದಿತ ಕೋಟಾವನ್ನು ಕೈ ಅಭ್ಯರ್ಥಿ ತಲುಪಿದ್ದಾರೆ. ಬಿಜೆಪಿ ಒಟ್ಟು 33,878 ಮತ ಪಡೆದು ಮೈ.ವಿ. ರವಿಶಂಕರ್ ಸೋಲು ಅನುಭವಿಸಿದರು. ಇನ್ನೊಂದೆಡೆ ಜೆಡಿಎಸ್ ಅಭ್ಯರ್ಥಿ ಹೆಚ್.ಕೆ.ರಾಮು (HK.ramu) 19,630 ಮತ ಪಡೆದು ಹೀನಾಯ ಸೋಲು ಕಂಡಿದ್ದಾರೆ.
ಇದನ್ನೂ ಓದಿ : – SUPREME COURT – ತೆರವು ಕಾರ್ಯ ಪ್ರತೀಕಾರದ ಕ್ರಮವಾಗಬಾರದು: ಉತ್ತರ ಪ್ರದೇಶಕ್ಕೆ ಸುಪ್ರೀಂ ನೋಟಿಸ್
ಮಧು ಜಿ ಮಾದೇಗೌಡ ಗೆಲುವಿನ ಬಳಿಕ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah), ನಾಲ್ಕು ಸ್ಥಾನಗಳಿಗೆ ಚುನಾವಣೆಯಾಗಿತ್ತು. ನಿನ್ನೆ ಕೌಂಟಿಂಗ್ ಶುರುವಾಗಿ ಮೈಸೂರು ಮತ ಎಣಿಕೆ ಮುಂದುವರೆದಿತ್ತು. ಮೊದಲ ಪ್ರಾಶಸ್ತ್ಯದ ಮತ ಎಲಿಮೇನೇಟ್ ಹಂತಕ್ಕೆ ಹೋಗಿತ್ತು. ಇದೀಗ ಎರಡನೇ ಪ್ರಾಶಸ್ತ್ಯ ಮತಗಳಿಂದ ನಮ್ಮ ಅಭ್ಯರ್ಥಿ ೧೨೨೦೫ ಮತಗಳಿಂದ ಮಧು ಮಾದೇಗೌಡ ಗೆಲುವು ಸಾದಿಸಿದ್ದಾರೆ ಎಂದರು.
![](https://rajnewskannada.in/wp-content/uploads/2022/06/image-270.png)
ಕಾಂಗ್ರೆಸ್ ಗೆ ಪ್ರತಿಸ್ಪರ್ಧಿ ಆಗಿದ್ದ ಎಂ.ವಿ.ರವಿಶಂಕರ್ ೩೬ ಸಾವಿರ ಮತಗಳು ಬಂದಿವೆ. ನಮ್ಮ ಅಭ್ಯರ್ಥಿಗೆ ೪೬ ಸಾವಿರ ಮತ ಬಂದಿವೆ. ಜೆಡಿಎಸ್ ಅಭ್ಯರ್ಥಿಗೆ ೧೯ ಸಾವಿರ ಮತ ಬಂದಿವೆ. ನಾವು ಪದವೀಧರ ಕ್ಷೇತ್ರದಲ್ಲಿ ಗೆದ್ದಿರಲಿಲ್ಲ. ಶಿಕ್ಷಕರ ಕ್ಷೇತ್ರದಲ್ಲಿ ನಾವು ಗೆಲ್ಲುತ್ತಿದ್ದೆವು. ಇದು ಮೊದಲ ಬಾರಿ ಗೆಲುವಾಗಿದೆ. ಜೆಡಿಎಸ್, ಬಿಜೆಪಿಯವರು ನಮ್ಮ ಭದ್ರಕೋಟೆ ಅಂತ ಹೇಳ್ತಿದ್ರು. ಮಧುಮಾದೇಗೌಡಗೆ ಅಭಿನಂದನೆ ಸಲ್ಲಿಸ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದರು. ಇದನ್ನೂ ಓದಿ : – ನಿರುದ್ಯೋಗಿಗಳ ಅಗ್ನಿಪರೀಕ್ಷೆ ಬೇಡ ಮೋದಿಜಿ- ಪ್ರಧಾನಿಗೆ ರಾಹುಲ್ ಒತ್ತಾಯ