ಬೆಂಗಳೂರಿನಲ್ಲಿ (Bengaluru) ವಜ್ರದ ವ್ಯಾಪಾರಿಯನ್ನ (Diamond merchant) ಕಿಡ್ನಾಪ್ (Kidnep) ಮಾಡಿ ಸುಲಿಗೆ ಮಾಡಿದ್ದ ಆರೋಪಿಗಳನ್ನು ಹೈಗ್ರೌಂಡ್ಸ್ ಪೊಲೀಸರು (High ground police ) ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ .
ನಾರಾಯಣ (Narayana), ಉಮೇಶ್ ( Umesh) ಹಾಗೂ ನೂತನ್ (Nutan) ಬಂಧಿತ ಆರೋಪಿಗಳು. ಏಪ್ರಿಲ್ 20 ರಂದು ಯುಬಿ ಸಿಟಿ ಬಳಿ ಘಟನೆ ನಡೆದಿತ್ತು . ಮಂಡ್ಯ ಮೂಲದ ವಜ್ರದ ವ್ಯಾಪಾರಿಯನ್ನ ಕಿಡ್ನಾಪ್ ಮಾಡಿದ್ದರು . ಕಿಡ್ನಾಪ್ ಮಾಡಿ 24.5 ಲಕ್ಷ ಹಣ ಹಾಗೂ 6 ಚೆಕ್ ಸುಲಿಗೆ ಮಾಡಿದ್ದರು . ಆರೋಪಿ ನಾರಾಯಣ್ 40 ಕ್ಕೂ ಹೆಚ್ಚು ಚಿತ್ರಗಳಲ್ಲಿ ಖಳನಟನಾಗಿ ನಟಿಸಿದ್ದು ರೌಡಿಶೀಟರ್ ಆಗಿದ್ದಾನೆ . ವೀರಪರಂಪರೆ, ದುಷ್ಟ, ಮೂರನೇ ಕ್ಲಾಸ್ ಮಂಜ, ಬಿಕಾಂ ಭಾಗ್ಯ ಸಿನೆಮಾಗಳಲ್ಲಿ ನಟಿಸಿದ್ದ. ಎರಡನೇ ಆರೋಪಿ ಉಮೇಶ್ ನೀಡಿದ ಮಾಹಿತಿ ಮೇಲೆ ಆರೋಪಿಗಳು ಕಿಡ್ನಾಪ್ ಪ್ಲಾನ್ ಮಾಡಿದ್ದರು . ಇದನ್ನೂ ಓದಿ : – ಬೀದಿಗೆ ಬಿದ್ದ ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ಜಗಳ- ಡಿ ರೂಪಾ, ರಾಘವೇಂದ್ರ ಶೆಟ್ಟಿ ಪತ್ರ ಸಮರ