ಶಾಸಕ ಪ್ರಿಯಾಂಕ ಖರ್ಗೆಗೆ( PRIYANK KARGE ) ನೋಟಿಸ್ ನೀಡಿದಕ್ಕೆ ಗೃಹ ಮಂತ್ರಿಗಳಿಗೆ ಘೇರಾವ್ ಹಾಕಲು ಯತ್ನಿಸಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
![](https://rajnewskannada.in/wp-content/uploads/2022/05/raksh-1.png)
ಕಲಬುರಗಿ ನಗರದ ಗ್ರಾಂಡ್ ಹೊಟೇಲ್ ಬಳಿ ಗೃಹ ಮಂತ್ರಿ ಆರಗ ಜ್ಞಾನೇಂದ್ರಗೆ ಮುತ್ತಿಗೆ ಹಾಕಲು ಬಂದಿದ್ದ ಸುಮಾರು 20 ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಸಚಿವರಾದ ಪ್ರಭು ಚೌವ್ಹಾಣ್ ಗೆ ನೋಟಿಸ್ ಯಾಕೆ ನೀಡಿಲ್ಲವೆಂದು ಕಾರ್ಯಕರ್ತರು ಪ್ರಶ್ನಿಸಿದರು. ಗ್ರಾಂಡ್ ಹೋಟೆಲ್ ಗೆ ಗೃಹ ಮಂತ್ರಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಘೇರಾವ್ ಹಾಕಲು ಯತ್ನಿಸುತ್ತಿದ್ದ ಕೈ ಕಾರ್ಯಕರ್ತರನ್ನು ಕಲಬುರಗಿಯ ಪೊಲೀಸರು ಬಂಧಿಸಿದ್ದಾರೆ. ಪಿಎಸ್ಐ ಪರೀಕ್ಷೆ ಅಕ್ರಮದ ವಿರುದ್ದ ಕಾಂಗ್ರೆಸ್ ಕಾರ್ಯಕರ್ತರು ಕಿಡಿ ಕಾರಿದ್ದಾರೆ . ಇದನ್ನೂ ಓದಿ :- ಪಿಎಸ್ಐ (PSI) ನೇಮಕಾತಿಯಲ್ಲಿ ಅಕ್ರಮ – ಬೆಂಗಳೂರಿನಲ್ಲಿ 12 ಅಭ್ಯರ್ಥಿಗಳು ಅರೆಸ್ಟ್