ರಾಜ್ಯದಲ್ಲಿ ನಿರಂತರ ಆಡಳಿತ ದುಷ್ಪರಿಣಾಮ ನಡೆಯುತ್ತಿದೆ. ಇದರಿಂದ ನಮ್ಮ ರಾಜ್ಯ ಎಲ್ಲಿಗೆ ಹೋಗಬಹುದು ಎಂದು ಭಯವಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (H.D.KUMARA SWAMY) ಹೇಳಿದ್ದಾರೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಮಾತನಾಡಿದ ಅವರು ಯಾರದ್ದೋ ಒಬ್ಬ ಮಂತ್ರಿಯ ತಲೆದಂಡದ ಬಗ್ಗೆ ನಾನು ಮಾತನಾಡುತ್ತಿಲ್ಲ. ನಾನು ಮೊದಲು ಬಿಜೆಪಿ ಜೊತೆ ಸಮ್ಮಿಶ್ರ ಸರ್ಕಾರ ಮಾಡಿದ್ದೆ.
![](https://rajnewskannada.in/wp-content/uploads/2022/05/WhatsApp-Image-2022-05-06-at-6.29.23-PM1.jpeg)
ಯಡಿಯೂರಪ್ಪನವರು (YEDIYURAPPA ) ನಮ್ಮ ಕುಟುಂಬದ ಬಗ್ಗೆ ಲಘುವಾಗಿ ಮಾತನಾಡಿದ್ರು. ಜೆಡಿಎಸ್ ಮತ್ತು ಅಪ್ಪ ಮಕ್ಕಳನ್ನ ಮುಗಿಸುವುದೇ ನನ್ನ ಗುರಿ ಎಂದಿದ್ರು. ನಾನು ನನ್ನ ಕೊನೆಯ ಭಾಷಣದಲ್ಲಿ ಉತ್ತಮ ಕೆಲಸ ಮಾಡಿ ಎಂದಿದ್ದೆ. ಅಲ್ಲಿಂದ ಇಲ್ಲಿವರೆಗೆ ಭ್ರಷ್ಟಾಚಾರದ ಬಗ್ಗೆಯೂ ಚರ್ಚಿಸಿಲ್ಲ. ಹಲವಾರು ಇಲಾಖೆಯಲ್ಲಿ ಭ್ರಷ್ಟಾಚಾರ ನಡೀತಿದೆ. ಇತ್ತೀಚೆಗೆ ನೇಮಕಾತಿ ವಿಚಾರದಲ್ಲಿ ದೊಡ್ಡ ಮಟ್ಟದ ಅಕ್ರಮ ನಡಿಯುತ್ತಿದೆ.
![](https://rajnewskannada.in/wp-content/uploads/2022/05/WhatsApp-Image-2022-05-06-at-6.29.23-PM1-1.jpeg)
ಏನೆ ತನಿಖೆ ಮಾಡಿದ್ರೂ ತಾರ್ಕಿಕ ಅಂತ್ಯ ಏನಾಗುತ್ತೆ. ಈ ಹಿಂದಿನ ಸರ್ಕಾರಗಳು ಯಾವ ರೀತಿ ತನಿಖೆಗೆ ಕ್ರಮ ಕೈಗೊಂಡಿವೆ. ಅಂತಿಮವಾಗಿ ಇದರಿಂದ ಆಡಳಿತದ ಮೇಲೆ ದುಷ್ಪರಿಣಾಮ ಆಗುತ್ತೆ. ನೆನ್ನೆ ಅಮಿತ್ ಶಾ ನಿಮ್ಮ ಪಾಡಿಗೆ ನೀವು ಆಡಳಿತ ನಡೆಸಿ ಎಂದು ಹೇಳಿ ಹೋಗಿದ್ದಾರೆ.ಇದನ್ನೂ ಓದಿ : – ಎರಡನೇ ಡೋಸ್ ಮತ್ತು ಮುನ್ನೆಚ್ಚರಿಕಾ ಡೋಸ್ ನಡುವಿನ ಅಂತರವನ್ನು 6 ತಿಂಗಳಿಗೆ ತಗ್ಗಿಸಲು ಸರ್ಕಾರ ಚಿಂತನೆ
![](https://rajnewskannada.in/wp-content/uploads/2022/05/WhatsApp-Image-2022-05-06-at-6.29.23-PM5.jpeg)
ಈ ನಾಡಿನಲ್ಲಿ ಏನೇನು ನಡೆದಿದೆ ಎಂದು ಪಟ್ಟಿ ಮಾಡಿ ಹೇಳುತ್ತೇನೆ. ಮಂಗಳೂರು ಗೋಲೀಬಾರ್, ಬಾಂಬ್ ವಿಚಾರ, ಡ್ರಗ್ ವಿಚಾರ ಏನಾಯ್ತು. ಯಾವುದೇ ಒಂದು ವಿಚಾರ ತಾರ್ಕಿಕ ಅಂತ್ಯ ಕಾಣೋದಿಲ್ಲ. ಮಾಗಡಿಯಲ್ಲಿ ಒಂದೆರಡು ವಿದ್ಯಾರ್ಥಿಗಳು ಸೆಲೆಕ್ಟ್ ಆಗಿರೋದಕ್ಕೆ ಕಾಂಗ್ರೆಸ್ ನವರು ಬೊಬ್ಬೆ ಹೊಡೆದಿದ್ದಾರೆ. ಸಹಾಯಕ ಪ್ರಾಧ್ಯಾಪಕರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಅದರಲ್ಲಿ ಪ್ರಶ್ನೆ ಪತ್ರಿಕೆ ಸೋರಿದೆ ಎನ್ನುತ್ತೀರಿ. ಇದರ ಹಿಂದೆ ಯಾರ ಕೈವಾಡವಿದೆ. ಈ ಹುದ್ದೆಯ ಹಿಂದೆಯೂ ಶೇ. 80 ರಷ್ಟು ಹಗರಣ ನಡೆದಿದೆ ಎನ್ನುತ್ತಿದ್ದಾರೆ.
![](https://rajnewskannada.in/wp-content/uploads/2022/05/WhatsApp-Image-2022-05-06-at-6.29.23-PM3.jpeg)
ಪಿಎಸ್ಐ ನ ಮೂಲ ಕಿಂಗ್ ಪಿನ್ ಹೆಸರು ಹೇಳಲು ಸಾಧ್ಯನಾ. ಆ ಕಿಂಗ್ ಪಿನ್ ಬಗ್ಗೆ ಹೇಳಿದ್ರೆ ಸರ್ಕಾರವೇ ಉರುಳುತ್ತೆ. ಅದರಿಂದ ಆ ಬಗ್ಗೆ ಯಾರೂ ಕೂಡ ಕೈ ಹಾಕುತ್ತಿಲ್ಲ. ಅಶ್ವಥ್ ನಾರಾಯಣ್ ಹಲವಾರು ಯೂನಿವರ್ಸಿಟಿ ಗಳ ಪಿಂಚಣಿ ಹಣವನ್ನ ಡೈವರ್ಟ್ ಮಾಡಿದ್ದಾರೆ. ಕಟ್ಟಡ ಕಟ್ಟಲು ಐಐಟಿ ಕಟ್ಟಲು ಹಣ ಡೈವರ್ಟ್ ಮಾಡಿದ್ದಾರೆ. ಈ ಹಣವನ್ನ ಡೈವರ್ಟ್ ಮಾಡಿ ಯಾರಿಂದ ಕೆಲಸ ಮಾಡಿಸುತ್ತಿದ್ದೀರಿ ಎಂದು ಕಿಡಿಕಾರಿದ್ರು. ಇದನ್ನೂ ಓದಿ :- ಪಿಎಸ್ಐ (PSI) ನೇಮಕಾತಿಯಲ್ಲಿ ಅಕ್ರಮ – ಬೆಂಗಳೂರಿನಲ್ಲಿ 12 ಅಭ್ಯರ್ಥಿಗಳು ಅರೆಸ್ಟ್