ರಾಜ್ಯಸಭೆಗೆ ಸೂಕ್ತ ಅಭ್ಯರ್ಥಿ ನಮ್ಮ ರಾಜ್ಯದಲ್ಲಿಯೇ ಇದ್ದಾರೆ – ವಾಟಾಳ್ ನಾಗರಾಜ್ ಕಳವಳ

ರಾಜ್ಯಸಭೆಗೆ ನಾಲ್ವರನ್ನು ಕಳಿಸುವ ಅವಕಾಶ ನಮಗಿದೆ. ಈವರೆಗೆ  ಯಾವ ರಾಜಕೀಯ ಪಕ್ಷಗಳು ಪ್ರಾಮಾಣಿಕವಾಗಿ ನಡೆದುಕೊಂಡಿಲ್ಲ. ಬೇರೆ ರಾಜ್ಯದವರನ್ನ ಆಯ್ಕೆ ಮಾಡೋದೇ ಒಂದು ನೀತಿಯಾಗಿದೆ ಎಂದು ವಾಟಾಳ್ ನಾಗರಾಜ್ (VATAL NAGRAJ ) ಹೇಳಿದ್ದಾರೆ .

ವಿಧಾನಸೌಧದಲ್ಲಿ ಮಾತಾನಾಡಿದ ಅವರು ಮತ್ತೆ ನಿರ್ಮಲಾ ಸೀತಾರಾಮನ್ ಅವರು ರಾಜ್ಯದಿಂದ ಆಯ್ಕೆಗೆಯಾಗಲು ಬಯಸುತ್ತಿದ್ದಾರೆ. ನಮ್ಮ ರಾಜ್ಯದ ಎಲ್ಲಾ ಉನ್ನತ ಅಧಿಕಾರಿಗಳು ಹೊರ ರಾಜ್ಯದವರಾಗಿದ್ದಾರೆ . ಯಾವುದೇ ಕಾರಣಕ್ಕೂ ಹೊರ ರಾಜ್ಯದವರನ್ನ ಆಯ್ಕೆ ಮಾಡಬಾರದು. ನಮ್ಮ ರಾಜ್ಯದಲ್ಲೇ ಮೇಧಾವಿ, ಹೋರಾಟಗಾರರು ಇದ್ದಾರೆ. ಬರಗೂರು ರಾಮಚಂದ್ರಪ್ಪ, ದೇವನೂರು ಮಹದೇವಪ್ಪ , ಹಂ ಪ  ನಾಗರಾಜ್  ಇವರೆಲ್ಲಾ ನಾಡಿನ ಅಗ್ರಗಣ್ಯರು. ಇಂಥಹವರನ್ನ ಆಯ್ಕೆ ಮಾಡಿ ಕಳುಹಿಸಿ ಎಂದು ರಾಜಕೀಯ ಪಕ್ಷಗಳಿಗೆ ವಾಟಾಳ್ ಮನವಿ ಮಾಡಿದ್ದಾರೆ.

 ಬಸವರಾಜ್ ಬೊಮ್ಮಾಯಿ (BASAVARAJ BOMMAI ) ಒಳ್ಳೆಯ ಸಿಎಂ

ಬೊಮ್ಮಾಯಿ ಅವರ ಬದಲಾವಣೆಗೆ ಚಿಂತನೆ ನಡೆದಿದೆಯಂತೆ. ಬೊಮ್ಮಾಯಿ ಒಳ್ಳೆಯವರು, ಅವರು ಸಿಎಂ ಆಗಿ ಮುಂದುವರಿಯಲಿ ಎಂದು ಸಿಎಂ ಬೊಮ್ಮಾಯಿ ಪರ ವಾಟಾಳ್ ನಾಗರಾಜ್ ಬ್ಯಾಟಿಂಗ್ ನಡೆಸಿದ್ದಾರೆ. ಇದನ್ನೂ ಓದಿ : – ದಕ್ಷಿಣ ಭಾರತದಲ್ಲಿ ಚಿಗುರೊಡೆದ ಬಾಕ್ಸಿಂಗ್ – ಹೆಮ್ಮೆಯ ಸಾಧಕಿ ನಿಖತ್ ಝರೀನ್

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!