31 ಕೆಜಿ ತೂಕದ ಗಂಧದ ಕಟ್ಟಿಗೆಗಳನ್ನು ಕಳ್ಳತನ ಮಾಡಿಕೊಂಡು, ಸಾಗಿಸುವಾಗ ಕಳ್ಳರು ಸಿಕ್ಕಿಬಿದ್ದ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.
![](https://rajnewskannada.in/wp-content/uploads/2022/05/WhatsApp-Image-2022-05-28-at-4.32.00-PM-1-577x1024.jpeg)
ಜಿಲ್ಲೆಯ ಲಿಂಗಸೂರು ಪಟ್ಟಣದ ಯರಗುಂಟಿ ಕ್ರಾಸ್ ಹತ್ತಿರ ಖಚಿತ ಮಾಹಿತಿಯೊಂದಿಗೆ ದಾಳಿ ಮಾಡಿದ ಲಿಂಗಸ್ಗೂರು ಠಾಣಾ ಪೊಲೀಸರು, 2 ಆರೋಪಿಗಳನ್ನು ಮತ್ತು ಸುಮಾರು 1ಲಕ್ಷ 25 ಸಾವಿರ ಮೌಲ್ಯದ ಗಂಧದ ಕಟ್ಟಿಗೆಗಳನ್ನು ವಶಕ್ಕೆ ಪಡೆದಿದ್ದಾರೆ.
![](https://rajnewskannada.in/wp-content/uploads/2022/05/WhatsApp-Image-2022-05-28-at-4.32.01-PM-577x1024.jpeg)
ತಾಲೂಕಿನ ಕೆಸರಟ್ಟಿ ಸೀಮದ ಖಾಸಗಿ ವ್ಯಕ್ತಿಗಳ ಹೊಲದಲ್ಲಿ ಹಾಕಿದ ಗಂಧದ ಮರ ಕಡಿದು ಕಳ್ಳತನದಲ್ಲಿ ಹೊತ್ತೊಯ್ಯುತ್ತಿದ್ದ ಖಚಿತ ಮಾಹಿತಿಯೊಂದಿಗೆ ದಾಳಿ ಮಾಡಿ, ಹನುಮಂತು, ದುರ್ಗಪ್ಪ, ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ : – ಪ್ರಸನ್ನನಂದಾಪುರಿ ಸ್ವಾಮೀಜಿ ಆರೋಗ್ಯ ವಿಚಾರಿದ ಸಿಎಂ ಬೊಮ್ಮಾಯಿ