ಬೆಂಗಳೂರು: ತೌಕ್ತೆ ಚಂಡಮಾರುತದ ವೇಗ ಹೆಚ್ಚಾಗಿದೆ. ಪೂರ್ವ ಅರಬ್ಬೀ ಸಮುದ್ರದಿಂದ ಮುಂಬೈನತ್ತ ತೌಕ್ತೆ ಚಂಡಮಾರುತ ಚಲಿಸುತ್ತಿದೆ. ನೆನ್ನೆಯ ಸಿನಾಪ್ಟಿಕ್ಸ್ ಪ್ರಕಾರ ಮೇ 18ರಂದು ಗುಜರಾತ್ ತಲುಪಲಿದೆ ಎನ್ನಲಾಗುತ್ತಿತ್ತು. ಆದರೆ, ತೌಕ್ತೆಯ ವೇಗ ಹೆಚ್ಚಾಗಿದ್ದು ಇಂದೇ ಗುಜರಾತ್ ಕರಾವಳಿ ತಲುಲಿದೆ ಎನ್ನಲಾಗುತ್ತಿದೆ.
ಇಂದಿನಿಂದ ರಾಜ್ಯದಲ್ಲಿ ಚಂಡಮಾರುತ ಪ್ರಭಾವ ಗಣನೀಯ ಇಳಿಕೆ ಕಾಣಲಿದೆ. ಆದರೂ ಮೇ 20 ವರೆಗೆ ರಾಜ್ಯದ ಕರಾವಳಿ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗಲಿದೆ.
ಇನ್ನು ಉತ್ತರ ಒಳನಾಡಿನ ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯಾಗಲಿದ್ದು, ದಕ್ಷಿಣ ಒಳನಾಡಿನ ಬಹುತೇಕ ಸ್ಥಳಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಇತ್ತ ರಾಜಧಾನಿಯಲ್ಲು ತೌಕ್ತೆ ಎಫೆಕ್ಟ್ ನಿಂದ ಇನ್ನೆರಡು ದಿನ ಹಗುರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ ಎಸ್ ಪಾಟೀಲ್ ತಿಳಿಸಿದ್ದಾರೆ.