ಬೆಂಗಳೂರು: ಸದಾಶಿವ ಆಯೋಗ ಜಾರಿಗೆ ವಿಚಾರವಾಗಿ ಹೆಚ್.ಸಿ ಮಹದೇವಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಸಭೆ ಮಾಡುವುದರಲ್ಲಿ ತಪ್ಪೆನಿಲ್ಲ, ಸದಾಶಿವ ಆಯೋಗ ಜಾರಿ ಮಾಡಬೇಕು ಎಂದು ಹಲವು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಬಿಜೆಪಿ ಸರ್ಕಾರ ವಿರೋಧ ಮಾಡಿದೆ. ಸಿಎಂ ಬಳಿ ಸಂವಿಧಾನ ಮತ್ತು ಕಾನೂನಾತ್ಮಕವಾಗಿ ಏನ್ ಮಾಡಬೇಕು ಎಂದು ಚರ್ಚೆ ಮಾಡುತ್ತೇವೆ ಎಂದರು.
ಅಗತ್ಯ ಬಿದ್ರೆ ಸಚಿವರು,ಶಾಸಕರ ಮನೆಗೆ ಮುತ್ತಿಗೆ ಹಾಕಿ ಎಂಬ ಮುನಿಯಪ್ಪ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಅವರು ಏನ್ ಹೇಳಿದ್ದಾರೆ ನನಗೆ ಗೊತ್ತಿಲ್ಲ. ಅವರ ಹೇಳಿಕೆ ಅವರನ್ನೆ ಕೇಳಬೇಕು. ಈಗಿರುವುದು ಸದಾಶಿವ ಆಯೋಗ ಜಾರಿ ಮಾಡಲು ಕಾನೂನಾತ್ಮಕವಾಗಿ ಚರ್ಚೆ ಮಾಡಬೇಕಾಗಿದೆ ಎಂದರು.
ರಾಜ್ಯದಲ್ಲಿ ಬರಗಾಲ ಇದೆ ಆದ್ರು ತೆಲೆಂಗಾಣಕ್ಕೆ ಸಚಿವರ ನೇಮಕಕ್ಕೆ ವಿರೋಧ ವಿಚಾರವಾಗಿ ಮಾತನಾಡಿ, ಕೆಲವರು ತೆಲಂಗಾಣಕ್ಕೆ ಹೋಗ್ತಾರೆ. ಇನ್ನೂ ಉಳಿದಿರುವ ಜಿಲ್ಲೆಗಳಿಗೆ ಹೋಗಿ ಪರೀಶಿಲನೆ ನಡೆಸುತ್ತಿದ್ದಾರೆ. ಕೃಷಿ ಸಚಿವರು,ಕಂದಾಯ ಸಚಿವರು ಅನೇಕ ಜಿಲ್ಲೆಗಳಿಗೆ ಭೇಟಿ ಕೊಡ್ತಾ ಇದ್ದಾರೆ. ಈಗಾಗಲೇ ದೆಹಲಿಗೂ ಹೋಗಿ ಅಧಿಕಾರಿಗಳನ್ನ ಭೇಟಿ ಮಾಡಿದ್ದಾರೆ. ರಾಜ್ಯದಲ್ಲಿ ಬರದ ಬಗ್ಗೆ ಮಾಹಿತಿ ನಿಡಿದ್ದಾರೆ. ಆದ್ರೂ ಕೇಂದ್ರ ಸಚಿವರು ಭೇಟಿಗೆ ಅವಕಾಶ ಕೊಡ್ತಾಯಿಲ್ಲ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ಹೇಳಿದ್ದಾರೆ.