ಇಂದು ರಾಜ್ಯಾದ್ಯಂತ ಅಂಬಿ ಹುಟ್ಟು ಹಬ್ಬವನ್ನು ಅಭಿಮಾನಿಗಳು ಆಚರಿಸುತ್ತಿದ್ದಾರೆ. ಬೆಳಿಗ್ಗೆ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಶ್ ಸಮಾಧಿಗೆ ಪೂಜೆ ಸಲ್ಲಿಸುವುದರ ಮೂಲಕ ಸುಮಲತಾ ಅಂಬರೀಶ್, ಅಭಿಷೇಕ್ ಅಂಬರೀಶ್, ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ ನಮನ ಸಲ್ಲಿಸಿದರು.
![](https://rajnewskannada.in/wp-content/uploads/2022/05/image-68.png)
ನಂತರ ಅಂಬರೀಶ್ ಅವರ ಹುಟ್ಟೂರಿಗೂ ಸುಮಲತಾ ಅಂಬರೀಶ್ ತೆರಳಿದರು. ಅಲ್ಲದೇ, ಅಂಬರೀಶ್ ಗಾಗಿ ವಿಶೇಷ ಕವಿತೆಯನ್ನು ಸಮಲತಾ ಬರೆದುಕೊಂಡು ಅದನ್ನು ಫೇಸ್ ಬುಕ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಂಬರೀಶ್ ಅವರನ್ನು ಆಕಾಶಕ್ಕೆ ಹೋಲಿಸಿರುವ ಸುಮಲತಾ ಅಂಬರೀಶ್, ಆಕಾಶಕ್ಕೆ ಅಳತೆಯ ಮಿತಿ ಹೇಗಿಲ್ಲವೋ, ಹಾಗೆಯೇ ಅಂಬರೀಶ್ ಅವರ ಪ್ರೀತಿಗೆ ಯಾವುದೇ ಮಿತಿ ಇರಲಿಲ್ಲ. ಇದನ್ನೂ ಓದಿ :- ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ದ್ಯಾವಮ್ಮ ಭೇಟಿ ನೀಡಿದ ಶಿವಣ್ಣ
![](https://rajnewskannada.in/wp-content/uploads/2022/05/image-69.png)
ಹಾಗಾಗಿ ಅವರು ಆಕಾಶದ ಒಡೆಯ ಅನಿಸಿಕೊಂಡಿದ್ದರು. ನೀವು ನನ್ನಲ್ಲಿ ಅಸಂಖ್ಯಾತ ನೆನಪುಗಳನ್ನು ಬಿಟ್ಟು ಹೋಗಿದ್ದೀರಿ. ಈ ಜೀವನಕ್ಕೆ ಸಾಕಾಗಷ್ಟು ಪ್ರೀತಿ ಕೊಟ್ಟಿದ್ದೀರಿ. 70 ವಯಸ್ಸು ಅನ್ನುವುದು ಅಂಬಿ ಎಂಬ ಮೇರು ವ್ಯಕ್ತಿತ್ವದ ಮುಂದೆ ಸಣ್ಣ ಸಂಖ್ಯೆ. ನೀವು ನಮ್ಮಲ್ಲಿ ಶಾಶ್ವತವಾಗಿ ಇರುವುದರಿಂದ ವಯಸ್ಸು ಅನ್ನುವುದ ಕೇವಲ ಸಂಖ್ಯೆ. ಅಂಬಿ ಅಮರ’ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ :- ಬೆಂಗಳೂರಿನ ಅಣ್ಣಮ್ಮ ದೇವಸ್ಧಾನಕ್ಕೆ ಭೇಟಿ ನೀಡಿದ ನಟಿ ಅಮೂಲ್ಯ