ಸ್ಯಾಂಡಲ್ ವುಡ್ (Sandalwood) ನಟಿ ಹರಿಪ್ರಿಯಾ (Haripriya) ಮತ್ತು ನಟ ವಸಿಷ್ಠ ಸಿಂಹ (Vasista simha) ಮದುವೆ ನಾಳೆ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮ (Sacchidananda ashrama) ದಲ್ಲಿ ನಡೆಯಲಿದೆ. ಮದುವೆಗಾಗಿ ಈಗಾಗಲೇ ಸಿದ್ಧತೆ ನಡೆದಿದ್ದು, ಎರಡೂ ಕುಟುಂಬದ ಸದಸ್ಯರು ಈಗಾಗಲೇ ಆಶ್ರಮದಲ್ಲಿ ಬೀಡುಬಿಟ್ಟಿದ್ದಾರೆ.
ನಾಳೆ ನಡೆಯಲಿರುವ ಮದುವೆ ಮುಹೂರ್ತದಲ್ಲಿ ಡಾಲಿ ಧನಂಜಯ್ (dhananjay) , ಪ್ರಮೋದ್ ಶೆಟ್ಟಿ, ರಿಷಬ್ ಶೆಟ್ಟಿ, ಸತೀಶ್ ನೀನಾಸಂ ಸೇರಿದಂತೆ ಅನೇಕ ಕಲಾವಿದರು ಭಾಗಿಯಾಗಲಿದ್ದಾರೆ. ಸಾಂಪ್ರದಾಯಿಕವಾಗಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದು, ತಮ್ಮ ನೆಚ್ಚಿನ ಆಶ್ರಮದಲ್ಲೇ ಮದುವೆಯಾಗಬೇಕು ಎನ್ನುವುದು ಅವರ ಕನಸಾಗಿತ್ತು. ಅಲ್ಲದೇ, ವಸಿಷ್ಠ ಮೂಲತಃ ಮೈಸೂರಿನವರೇ ಆಗಿರುವುದರಿಂದ ಸಚ್ಚಿದಾನಂದ ಆಶ್ರಮವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ನಾಳೆ ಬೆಳಗ್ಗೆ ಅದ್ಧೂರಿಯಾಗಿಯೇ ಸಿಂಹಪ್ರಿಯ ಜೋಡಿ ಹೊಸ ಜೀವನಕ್ಕೆ ಕಾಲಿಡಲಿದ್ದಾರೆ. ಇದನ್ನು ಓದಿ :- ಎರಡನೇ ಮದುವೆ ತಯಾರಿ ಸುದ್ದಿ ಸುಳ್ಳು – ನಟಿ ಪ್ರೇಮಾ
ಕುಟುಂಬಸ್ಥರು ಮತ್ತು ಕೆಲವೇ ಆಪ್ತರಿಗೆ ನಾಳೆ ಆಹ್ವಾನ ನೀಡಿದ್ದು, ಜನವರಿ 28ರಂದು ಬೆಂಗಳೂರಿನಲ್ಲಿ ಆರತಕ್ಷತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇಂದು ಉದ್ಯಮದ ಬಹುತೇಕ ಗಣ್ಯರಿಗೆ ಆಹ್ವಾನ ಹೋಗಿದೆ. ಅಲ್ಲದೇ, ತಮಿಳು ಮತ್ತು ತೆಲುಗು ಚಿತ್ರರಂಗದಿಂದಲೂ ಕೆಲ ಕಲಾವಿದರು ಸಿಂಹಪ್ರಿಯ ಮದುವೆಗೆ ಆಗಮಿಸಲಿದ್ದಾರೆ.
ಇದನ್ನು ಓದಿ :- ಪಾನೀಯ ಕಂಪನಿಗೆ ಯಶ್ ರಾಯಭಾರಿ, ಸ್ಟೈಲ್ ನೋಡಿ ಫ್ಯಾನ್ಸ್ ಫಿದಾ….!