ಸಾರಿಗೆ ನೌಕರರ ಕಾನೂನು ವಿರೋಧಿ ಹೋರಾಟ ಬಗ್ಗು ಬಡಿಯೋದು ನಮಗೆ ಗೊತ್ತಿದೆ: ಸಚಿವ ಈಶ್ವರಪ್ಪ

ಮಂಗಳೂರು: ಸಾರಿಗೆ ನೌಕರರ ದಾರಿ ತಪ್ಪಿಸುವುದು ಮತ್ತು ರಾಜ್ಯದ ಅಭಿವೃದ್ಧಿ ಕುಂಠಿತಗೊಳಿಸುವುದಷ್ಟೇ ಕೋಡಿಹಳ್ಳಿ ಚಂದ್ರಶೇಖರ್ ಕೆಲಸ. ವಾಸ್ತವದಲ್ಲಿ ಅವರು ನಾಯಕನೇ ಅಲ್ಲ. ಅವರ ನೇತೃತ್ವದಲ್ಲಿ ನಡೆಸುತ್ತಿರುವ ಕೆಎಸ್‍ಆರ್ ಟಿಸಿ ನೌಕರರ ಕಾನೂನು ವಿರೋಧಿ ಹೋರಾಟವನ್ನು ಬಗ್ಗು ಬಡಿಯಲು ನಮಗೂ ಗೊತ್ತಿದೆ ಎಂದು ಸಚಿವ ಕೆ.ಎಸ್‍.ಈಶ್ವರಪ್ಪ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಾರಿಗೆ ನಿಗಮದ ಸಿಬ್ಬಂದಿಯನ್ನು ಸರಕಾರಿ ನೌಕರರನ್ನಾಗಿ ಮಾಡಬೇಕು ಎಂಬುದು ಅವರ ಬೇಡಿಕೆ. ಒಂದು ವೇಳೆ ಅವರ ಬೇಡಿಕೆ ಈಡೇರಿಸಿದರೆ, ನಾಳೆ ಎಲ್ಲರೂ ಆ ಬೇಡಿಕೆ ಇಡುತ್ತಾರೆ. ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ನಡೆಯುವ ಹೋರಾಟದ ಬೇಡಿಕೆಯಲ್ಲಿ ಶೇ.1ರಷ್ಟು ಕೂಡಾ ನ್ಯಾಯ ಇಲ್ಲ. ನೌಕರರು ಅವರ ಹಿಂದೆ ಹೋದರೆ ದಾರಿ ತಪ್ಪುತ್ತಾರೆ ಎಂದು ತಿಳಿಸಿದರು.

ಸರ್ಕಾರಿ ‌ಬಸ್ ನೌಕರರ 8 ಬೇಡಿಕೆಗಳನ್ನು ಈಗಾಗಲೇ ಈಡೇರಿಸಿದ್ದೇವೆ. ಒಂದು ಮಾತ್ರ ಬಾಕಿ ಇದೆ. ಅದನ್ನು ಈಡೇರಿಸಲು ಸಾಧ್ಯವಿಲ್ಲ. ಮುಷ್ಕರದಿಂದ ಜನರಿಗೆ ತೊಂದರೆ ಆಗುವಾಗ ನಾವು ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ನೌಕರರು ಕೋಡಿಹಳ್ಳಿ ನಾಯಕತ್ವವನ್ನು ತೊರೆದು, ಮುಷ್ಕರ ಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕು. ಇದರಿಂದ ನಿಮಗೂ ಒಳ್ಳೆಯದು, ಸರಕಾರಕ್ಕೂ ಒಳ್ಳೆಯದು. ಕೋಡಿಹಳ್ಳಿ ವಿರುದ್ಧ ಕ್ರಮ ಕೈಗೊಳ್ಳುವುದು ದೊಡ್ಡ ಮಾತಲ್ಲ. ಅದು ಎರಡು ನಿಮಿಷದ ಕೆಲಸ. ನೌಕರರಿಗೆ ಅರ್ಥವಾಗಬೇಕೆಂದು ಸುಮ್ಮನಿದ್ದೇವೆ ಎಂದು ಸಚಿವ ಈಶ್ವರಪ್ಪ ಖಡಕ್ಕಾಗಿ ಹೇಳಿದರು.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!