ನನಗೆ ಪಕ್ಷದಿಂದ ಟಾಸ್ಕ್ ಕೊಟ್ಟಿದ್ದಾರೆ ಎಂದು ಹಿಂದುಳಿದ ವರ್ಗಗಳ ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ (Madhu bangarappa) ಹೇಳಿದ್ದಾರೆ. ಹಾವೇರಿ (Haveri) ಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಜಿಲ್ಲಾವಾರು ಹಿಂದುಳಿದ ವರ್ಗಗಳ ಸಮಾವೇಶಗಳನ್ನ ಮಾಡುತ್ತೇವೆ.
ಜನವರಿ ಅಥವಾ ಫೆಬ್ರವರಿ 15 ರೊಳಗೆ ಜಿಲ್ಲಾಮಟ್ಟದ ಸಮಾವೇಶ ಮಾಡ್ತೀವಿ. ಮಾಚ್೯ ಮೊದಲ ವಾರದಲ್ಲಿ ರಾಜ್ಯ ಮಟ್ಟದ ಹಿಂದುಳಿದ ವರ್ಗಗಳ ಸಮಾವೇಶ ನಡೆಯುತ್ತದೆ. ರಾಹುಲ್ ಗಾಂಧಿಯವರು ರಾಜ್ಯಮಟ್ಟದ ಸಮಾವೇಶಕ್ಕೆ ಬರುತ್ತಾರೆ. ಹುಬ್ಬಳ್ಳಿ, ದಾವಣಗೆರೆ (Davangere) , ಅಥವಾ ಹಾವೇರಿ (Haveri) ಯಲ್ಲಿ ರಾಜ್ಯಮಟ್ಟದ ಹಿಂದುಳಿದ ವರ್ಗಗಳ ಸಮಾವೇಶ ನಡೆಯಲಿದೆ.
ರಾಜ್ಯದಲ್ಲಿ ಶೇಕಡಾ 55 ರಷ್ಟು ಮತದಾರರು ಕಾಂಗ್ರೆಸ್ ಪರ ಇದ್ದಾರೆ. ಬಿಜೆಪಿ (BJP) ಯವರಿಗೆ ಒಂದು ಮನೆ ಕೊಡೋದಕ್ಕೆ ಆಗಲಿಲ್ಲ. ಹೀಗಾಗಿ ಗ್ರಾಮ ಪಂಚಾಯತ್ ಸದಸ್ಯರು ಮನೆಯಿಂದ ಹೊರಬರುವುದಕ್ಕೆ ಆಗ್ತಿಲ್ಲ. ಸರಕಾರ ಮೂರು ಜಿಲ್ಲೆಯವರಿಗೆ ಭತ್ತ ಬೆಳೆಯಲು ಪ್ರೋತ್ಸಾಹ ಧನ ಕೊಡ್ತಾಯಿದೆ . ಇದನ್ನು ಓದಿ : – ಹೋದಲ್ಲೆಲ್ಲ ಸಿದ್ದರಾಮಯ್ಯ ಅಭ್ಯರ್ಥಿಗಳನ್ನ ಘೋಷಣೆ ಮಾಡುವುದು ಸರಿಯಲ್ಲ – ಸತೀಶ್ ಜಾರಕಿಹೊಳಿ
ಉತ್ತರ ಕರ್ನಾಟಕದ ರೈತರಿಗೂ ಪ್ರೋತ್ಸಾಹ ಧನ ಕೊಡಲಿ ಎಂದು ಹೇಳಿದ್ರು. ದಮ್ಮು ತಾಕತ್ತು ಇದ್ದರೆ ಮನೆ ಕೊಡಿ. ನರೇಂದ್ರ ಮೋದಿಯವರು ಹೆಣ್ಣುಮಕ್ಕಳ ಕಣ್ಣೀರು ಒರೆಸುತ್ತೇವೆ ಎಂದು ಹೇಳಿ ಒಮ್ಮೆ ಫ್ರೀಯಾಗಿ ಗ್ಯಾಸ್ ಕೊಟ್ಟು ಈಗ ದರ ಹೆಚ್ಚು ಮಾಡಿ ದಿನ ಹೆಣ್ಣುಮಕ್ಕಳು ಕಣ್ಣೀರು ಹಾಕುವಂತೆ ಮಾಡಿದ್ದಾರೆ. ಬಿಜೆಪಿ ಬದುಕಿದ್ದು ಸತ್ತು ಹೋಗಿದೆ. ಬಿಜೆಪಿಯವರು ಯಾರು ಸಿಎಂ ಆಗಿಲ್ಲ. ಅವರೆಲ್ಲ ವ್ಯಾವಹಾರಿಕವಾಗಿ ಬಂದವರು. ಇವರಿಗೆ ಮಾನ ಮರ್ಯಾದೆ ಇದೇನಾ, ಬರಿ ಹಸಿ ಸುಳ್ಳು ಎಂದು ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದ್ದಾರೆ.
ಇದನ್ನು ಓದಿ : – ಡಿಕೆಶಿ ಹೇಳಿಕೆ ಹಿಂಪಡೆಯದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡ್ತೇವೆ – ಪ್ರಮೋದ್ ಮುತಾಲಿಕ್ ಎಚ್ಚರಿಕೆ