ದೇಶದಲ್ಲಿ ಮಹಿಳೆ ಯರ ಮೇಲೆ ಹಾಗೂ ಮಕ್ಕಳ, ಯುವತಿಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಗಳನ್ನ ತಡೆಗಟ್ಟಲು ಪೊಲೀಸ್ ಇಲಾಖೆ ಈಗಾಗಲೇ ಸಾಕಷ್ಟು ಕ್ರಮ ಕೈಗೊಂಡಿದ್ದಾರೆ. ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಮಹಿಳೆಯರಿಗಾಗಿಯೇ ಒಂದು ಪಡೆಯನ್ನ ಸಜ್ಜುಗೊಳಿಸಲಾಗಿದೆ. ನಗರದ ಪೊಲೀಸ್ ಇಲಾಖೆಯಲ್ಲಿ ಮಹಿಳೆ ಮತ್ತು ಮಕ್ಕಳ ರಕ್ಷಣೆಗಾಗಿ ರಾಣಿ ಚೆನ್ನಮ್ಮ ಪಡೆ ಹೆಸ್ರಲ್ಲಿ ತಂಡವೊಂದು ರಚನೆಯಾಗಿದೆ. ಆಗ್ನೇಯ ವಿಭಾಗ ಡಿಸಿಪಿ ಸಿಕೆ ಬಾಬಾ ನೇತೃತ್ವದಲ್ಲಿ ಈ ಪಡೆ ಕೆಲಸ ಮಾಡ್ತಿದೆ. ಈ ಹಿಂದೆ ಡಿಸಿಪಿಯಾಗಿದ್ದ ಶ್ರೀನಾಥ್ ಜೋಶಿ ಈ ಚೆನ್ನಮ್ಮ ಪಡೆಗೆ ಚಾಲನೆ ಕೊಟ್ಟಿದ್ರು ಸದ್ಯ ಆಗ್ನೇಯ ವಿಭಾಗದ ಡಿಸಿಪಿಯಾಗಿರೋ ಸಿಕೆ ಬಾಬ ಈ ಪಡೆಗೆ ಹೊರ ರೂಪ ಮತ್ತು ಹುರುಪು ನೀಡಿದ್ದಾರೆ.

ಇನ್ನೂ ಈ ಪಡೆ ಹೇಗೆ ಕೆಲಸಮಾಡುತ್ತೆ ಅನ್ನೋದನ್ನ ನೋಡೋದಾದ್ರೆ. ಪೊಲೀಸ್ ಇಲಾಖೆಯ ಮಹಿಳಾ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಿ ಆ ಸಿಬ್ಬಂದಿಯಿಂದ ಮಹಿಳೆ ಮತ್ತು ಮಕ್ಕಳಿಗೆ ತರಬೇತಿ ನೀಡಲಾಗುತ್ತೆ. ಮಹಿಳೆಯರಿಗೆ ಆತ್ಮ ಸ್ಥೈರ್ಯ ತುಂಬುವ ಕೆಲಸ ಮಾಡೋ ಈ ಪಡೆ..ಕಷ್ಟ ಅಂತಾ ಕರೆ ಮಾಡೋ ಹೆಣ್ಮಕ್ಕಳ ಸಹಾಯಕ್ಕೆ ಈ ತಂಡ ಧಾವಿಸುತ್ತೆ. ಮಹಿಳೆಯರು ತಮ್ಮ ರಕ್ಷಣೆ ಹೇಗೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ತರಬೇತಿ ನೀಡಿ ದೈಹಿಕ ಸಾಮಾರ್ಥ್ಯ ಹೆಚ್ಚಿಸಿಕೊಳ್ಳು ಮಾರ್ಷಲ್ ಆರ್ಟ್ ನಂತ ಕೆಲ ಪಟ್ಟುಗಳನ್ನು ಈ ತಂಡ ಹೇಳಿಕೊಡುತ್ತೆ. ಸುಮಾರು 40 ಸಿಬ್ಬಂದಿಗಳ ಈ ತಂಡ ಇಗಾಗ್ಲೆ1500 ಕ್ಕೂ ಅಧಿಕ ಕಾರ್ಯಕ್ರಮಗಳನ್ನ ನಡೆಸಿದೆ.

ಮುಖ್ಯವಾಗಿ ಶಾಲಾ-ಕಾಲೇಜುಗಳು, ಸಾರ್ವಜನಿಕರ ಪ್ರದೇಶದಲ್ಲಿ ಕಾನೂನಿನ ಬಗ್ಗೆ ಅರಿವು ಮೂಡಿಸುವ ಈ ಪಡೆ ಪೋಕ್ಸೋ, ದೌರ್ಜನ್ಯ, ಸೈಬರ್ ಕ್ರೈಂಗಳ ಬಗ್ಗೆ ಮಹಿಳೆಯರಿಗೆ ತಿಳುವಳಿಕೆ ನೀಡುತ್ತೆ. ಮಹಿಳೆಯರಿಗೆ ವಿಶೇಷ ತರಬೇತಿ ನೀಡಲು ತಾವೇ ವಿಶೇಷ ತರಬೇತಿ ಪಡೆದಿರುವ ಮಹಿಳಾ ಸಿಬ್ಬಂದಿ ಪ್ರತ್ಯೇಕೆ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತುದ್ದಾರೆ. ಸದ್ಯ ಈ ಪಡೆಗೆ ನಗರದಲ್ಲಿ ಪ್ರಶಂಸೆ ವ್ಯಕ್ತವಾಗಿದ್ದು ಮುಂದಿನ ದಿನಗಳಲ್ಲಿ ಎಲ್ಲಾ ವಿಭಾಗದಲ್ಲೂ ಈ ಪಡೆ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ.
ವರದಿ : ನ್ಯಾನಪ್ಪನಹಳ್ಳಿ ಆರ್ ವೆಂಕಟೇಶ್